Ticker

6/recent/ticker-posts

ಅಪರಿಚಿತ ವ್ಯಕ್ತಿ ಅರಣ್ಯದಲ್ಲಿ ನೇಣು ಬಿಗಿದುಕೊಂಡ ಆತ್ಮಹತ್ಯೆ ಕೊಳೆತ ಸ್ಥತಿಯಲ್ಲಿ ಶವ ಪತ್ತೆ

ಮುಂಡಗೋಡ:ತಾಲೂಕಿನ ಕಾತೂರ ಗ್ರಾಮ ಪಂಚಾಯತ ವ್ಯಾಪ್ತಿಯ ಶಿಂಗನಳ್ಳಿ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯು ನೇಣು ಬಿಗಿದು ಕೊಂಡ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ.

ವ್ಯಕ್ತಿ ಯಾರು ಯಾವ ಉದ್ದೇಶ ಕ್ಕೆ ನೇಣು  ಹಾಕಿಕೊಂದ್ದಾನೆ ಎಂಬ ಮಾಹಿತಿ ಇನ್ನು ತಿಳಿದು ಬಂದಿಲ್ಲ ನೇಣು ಬಿಗಿದು ಕೊಂಡ ವ್ಯಕ್ತಿಯು ಸುಮಾರು ೩೦ ರಿಂದ ೩೫  ವಯಸ್ಸಿನವನು ಆಗಿದ್ದಾನೆ, ನೇಣು ಬಿಗಿದುಕೊಂಡ ವ್ಯಕ್ತಿಯ ಒಂದು ಕೈ ಇಲ್ಲದ ಸ್ಥಿತಿಯಲ್ಲಿ ಇದೆ. ಶವವು ಕೆಟ್ಟ ದುರ್ನಾಥ ಬಿರುತ್ತಿದ್ದು ಶವಕ್ಕೆ ಹುಳುಗಳು ನೋಣಗಳು ಇರುವುದು ಕಂಡು ಬಂದಿದೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ ಪೊಲೀಸ್ ತನಿಖೆಯಿಂದ ನೇಣು ಹಾಕಿಕೊಂಡ ವ್ಯಕ್ತಿ ಯಾರು ಯಾವ ಊರಿನವರು ಹಾಗು ಯಾವ ಉದ್ದೇಶಕ್ಕೆ ನೇಣು ಹಾಕಿ ಕೊಂಡಿದ್ದಾನೆ ಅಥವಾ ಯಾರಾದರು ನೇಣು ಹಾಕಿದ್ದಾರಾ ಎಂದು ತಿಳಿಯಬೇಕಾಗಿದೆ.

ಮುಂಡಗೋಡ ಪೊಲೀಸ್ ಠಾಣೆಯ ಕಾತೂರ್ ಗ್ರಾಮ ಪಂಚಾಯತ ವ್ಯಾಪ್ತಿಯ  ಸಿಂಗನಳ್ಳಿ ಗ್ರಾಮದ ಡ್ಯಾಂ ಹಿಂದೆ ಇರುವ  ಅರಣ್ಯದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಸಿಕ್ಕಿದ್ದು , ಶವದ ಬಲಗೈ ಇರುವುದು ಇಲ್ಲ.ತಮ್ಮ ಠಾಣಾ ವ್ಯಾಪ್ತಿಯಲ್ಲಿ ಈ ತರಹ ದೇಹ  ಹೋಲುವ ವ್ಯಕ್ತಿಯ ಕಾಣೆ ಪ್ರಕರಣ ದಾಕಲಾಗಿದ್ದಲ್ಲಿ ಮುಂಡಗೋಡ ಪೊಲೀಸ್ ಠಾಣೆಗೆ ಸಂಪರ್ಕಿಸಲು ಪೊಲೀದರು ತಿಳಿಸಿದ್ದಾರೆ.