Ticker

6/recent/ticker-posts

ಉತ್ತರ ಕನ್ನಡ ಜಿಲ್ಲೆ:ಚೌತಿಗೆ ಸೋಮವಾರದ ಬದಲು ಮಂಗಳವಾರ ರಜೆ.....!!!



ಮುಂಡಗೋಡ:ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಸಾರ್ವತ್ರಿಕ ರಜೆಯನ್ನು ಸಪ್ಟಂಬರ್‌ 18ರ ಬದಲು(ಸೋಮವಾರ) ದಿ.19ರಂದು ಮಂಗಳವಾರ ರಜೆ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಗಣೇಶ ಚೌತಿಯ ಸರ್ಕಾರಿ ರಜೆಯನ್ನು ಸಪ್ಟಂಬರ್‌ ೧೮ ಎಂದು ಘೋಷಿಸಲಾಗಿತ್ತು. ಅದರಂತೆ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಸೋಮವಾರ ರಜೆ ಘೋಷಿಸಿದ್ದದವು. ಆದರೆ, ಶನಿವಾರ  ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಅದರಲ್ಲಿ ರಜಾ ದಿನವನ್ನು ಮಾರ್ಪಡಿಸಲಾಗಿದೆ. ಇದರಿಂದ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು, ಅರೆ ಸರ್ಕಾರಿ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಮಂಗಳವಾರ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.