Ticker

6/recent/ticker-posts

ರಾಜಸ್ಥಾನ ವ್ಯಾಪಾರಿಯ ಹಣದ ಬ್ಯಾಗ್ ಎಗರಿಸಿದ ಕಳ್ಳರು..!!

 


ಮುಂಡಗೋಡ: ಬಸ್ ನಿಲ್ದಾಣದಲ್ಲಿ ರಾಜಸ್ಥಾನ್ ಮೂಲದ ಬಟ್ಟೆಯ ವ್ಯಾಪಾರಿಯೊಬ್ಬನು, ವಿವಿಧ ಬಟ್ಟೆ ಅಂಗಡಿಗಳಿಂದ ಚೆಕ್‌ ಹಾಗೂ ಹಣವನ್ನೂ ಸಂಗ್ರಹಿಸಿಕೊಂಡು ಹುಬ್ಬಳ್ಳಿಗೆ ಹೋಗಲು ಬಸ್ ಹತ್ತುವಾಗ ಮೂರು ಚೆಕ್ ಹಾಗೂ 168442 ನಗದು ಹಣ ವಿರುವ ಬ್ಯಾಗನ್ನು ಕಳ್ಳತನ ಮಾಡಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಮೂಲತ ರಾಜಸ್ತಾನ ರಾಜ್ಯದ ವ್ಯಕ್ತಿಯು ಹಾಲಿ ಹುಬ್ಬಳ್ಳಿಯ ದೇವರಾಮ್ ಖಲವಾ ಎಂಬ ಬಟ್ಟೆ ವ್ಯಾಪಾರಿ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಈತನು ಆನವಟ್ಟಿ, ಹಾನಗಲ್ ಮತ್ತು ಮುಂಡಗೋಡ ಬಟ್ಟೆ ಅಂಗಡಿಗಳಲ್ಲಿ ಸಂಗ್ರಹಿಸಿದ್ದ ಮೂರು ಚೆಕ್ ಹಾಗೂ ಹಣದೊಂದಿಗೆ ಪಟ್ಟಣದ ಬಸ್ ನಿಲ್ದಾಣದಿಂದ ಹುಬ್ಬಳ್ಳಿಗೆ ಹೋಗಲು ಬಸ್ ಹತ್ತುವಾಗ ಹಿಂದಿನಿಂದ ಯಾರೋ ಮಾಸ್ಕ್ ಹಾಕಿಕೊಂಡ ವ್ಯಕ್ತಿಯೊಬ್ಬ ನನ್ನ ಗಮನ ಬೇರೆ ಕಡೆಗೆ ಸೆಳೆದು ಬ್ಯಾಗಿನ ಜೀಪ್ ತೆಗೆದು ಅದರಲ್ಲಿದ್ದ 168442 ಹಣ ಮತ್ತು ಮೂರು ಚಕ್‌ಗಳು ಇರುವ ಬ್ಯಾಗ ಸಮೇತ ಪರಾರಿಯಾಗಿದ್ದಾನೆಂದು ದೇವರಾಮ್ ಅವರು ಗುರುವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ