ಅದೃಷ್ಟವಶಾತ್ ಕಟ್ಟಿಗೆ ಹೇರಿಕೊಂಡು ಹೋಗುತ್ತಿದ್ದ ಕಾತೂರ ಗ್ರಾಮದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಬಚಾವಾಗಿದ್ದಾರೆ. ಮುಂಡಗೋಡ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.
ಮಂಗಳೂರು ಕಡೆ ಹೊರಟಿದ್ದ ಸರ್ಕಾರಿ ಬಸ್ ಹಾಗೂ ಚಕ್ಕಡಿ ನಡುವೆ ಅಪಘಾತವಾಗಿದ್ದು, ಗಾಯಾಳುಗಳನ್ನು 108ಅಂಬುಲೆನ್ಸ್ ಸಿಬ್ಬಂದಿಗಳಾದ ಧನರಾಜ್ ಬಳೂರು ಮತ್ತು ಕೇಂಚೇಶ್ ಈ ಎನ್ ತಾಲೂಕಾ ಆಸ್ಪತ್ರೆಗೆ ದಾಖಲಿಸದ್ದಾರೆ.
ಕೊರೆದ ಸಾಗವಾನಿ ತುಂಡುಗಳು ಚಕ್ಕಡಿಯಲ್ಲಿ ಕಂಡುಬಂದಿದ್ದು, ಅಕ್ರಮ ಕಟ್ಟಿಗೆ ಸಾಗಿಸುವಾಗ ಅಪಘಾತ ಸಂಭವಿಸಿತೆ? ಎಂಬ ಸಂಶಯ ಕಾಡತೊಡಗಿದೆ. ಅರಣ್ಯ ಇಲಾಖೆಯವರ ತನಿಖೆಯಿಂದ ಸತ್ಯ ತಿಳಿಯಬೇಕಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.




ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು