ನಂದಿಕಟ್ಟಾ ಗ್ರಾಮದ ಬಾಬು ರಾಜಪ್ಪಾ ನವಲೇನವರ (52) ಎಂಬುವರು ಮೃತಪಟ್ಟ ದುರ್ದೈವಿ.
ಈತನು ವಿಪರೀತ ಸಾರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದನಂತೆ. ಶನಿವಾರ ಸಾಯಂಕಾಲ 4ಗಂಟೆಯ ಸುಮಾರಿಗೆ ತನ್ನ ತೋಟದ ಬೋರವೆಲ್ ಮನೆಗೆ ತೆರಳಿದಾಗ ಸಾರಾಯಿ ಕುಡಿದ ನಶೆಯಲ್ಲಿಯೆ ಜೋಲಿ ತಪ್ಪಿ ಬೋರವೇಲ್ ಮನೆಯ ಹತ್ತಿರ ಬಿದ್ದು, ಮುಖದ ಭಾಗಕ್ಕೆ ಹಾಗೂ ಕಾಲಿಗೆ ಗಾಯ ನೋವುಗಳಾಗಿ ಮೃತಪಟ್ಟಿದ್ದಾನೆ. ರವಿವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಹೀಗಂತ ಈತನ ಮಗ ವಿಠ್ಠಲ ನವಲೇನವರ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು