Ticker

6/recent/ticker-posts

ಉಜ್ವಲ ಯೋಜನೆ ಕಿಟ್ ವಿತರಿಸಿದ ಸಚಿವ ಹೆಬ್ಬಾರ್..!!!


ಮುಂಡಗೋಡ:ತಾಲೂಕಿನ ಬೆಡಸಗಾಂವ್ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ " ಉಜ್ವಲ ಯೋಜನೆ 2.0 " ಗ್ಯಾಸ್ ಕಿಟ್ ವಿತರಣಾ ಕಾರ್ಯಕ್ರಮವನ್ನು  ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಸೋಮವಾರ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ " ಪ್ರಧಾನ ಮಂತ್ರಿ ಉಜ್ವಲ್ ಗ್ಯಾಸ್ "  ಯೋಜನೆಯಡಿಯಲ್ಲಿ ಚಿಪಗೇರಿ ಹಾಗೂ ಬೆಡಸಗಾಂವ್ ಗ್ರಾಮದ 50 ಕ್ಕೂ ಹೆಚ್ಚಿನ ಅರ್ಹ ಫಲಾನುಭವಿಗಳಿಗೆ ಅಡುಗೆ ಸಿಲಿಂಡರ್ ಹಾಗೂ ಗ್ಯಾಸ್ ಕಿಟ್ ಅನ್ನು ವಿತರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ  ಎಲ್.ಟಿ.ಪಾಟೀಲ್, ಪ್ರಮುಖರಾದ  ಪ್ರಕಾಶ ನಾಯ್ಕ,  ಶಂಕರ ಹೆಗಡೆ, ವಿ.ಎಸ್. ನಾಯಕ ಹಾಗೂ ಪಂಚಾಯತ ಉಪಾಧ್ಯಕ್ಷರಾದ  ಮುಕುಂದ ನಾಯ್ಕ, ಸದಸ್ಯರಾದ ಮಾಲಿನಿ ನಾಯ್ಕ, ಬೂತ್ ಅಧ್ಯಕ್ಷರಾದ ಸತೀಶ್ ನಾಯ್ಕ ಹಾಗೂ ಬಿಜೆಪಿ ಪಕ್ಷದ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.