Ticker

6/recent/ticker-posts

ಬೆಳೆಸಾಲದ ಚಿಂತೆ;ರೈತ ಆತ್ಮಹತ್ಯೆ

ಮುಂಡಗೋಡ:ಬೆಳೆಗಾಗಿ ಮಾಡಿದ್ದ ಸಾಲದ ಬಗ್ಗೆ ಚಿಂತಿಸುತ್ತಿದ್ದ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ಜರುಗಿದೆ.

ಮುಡಸಾಲಿ ಗ್ರಾಮದ ಪ್ರಭು ತಿಪ್ಪಣ್ಣ ಬೆಡಸಗಾಂವ(50) ಮೃತ ರೈತನಾಗಿದ್ದಾನೆ. ಜುಲೈ10ರಂದು ಯಾವುದೋ ಕ್ರಿಮಿನಾಶಕ ಸೇವಿಸಿದ್ದರಿಂದ, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ತಂದು, ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಮೃತ ರೈತನಾದ ಪ್ರಭುವಿನ ಹೆಸರ ಮೇಲೆ ಕಾತೂರ ಸ್ವಸಹಾಯ ಸಹಕಾರಿ ಸಂಘದಲ್ಲಿ 2ಲಕ್ಷ ಹಾಗೂ ಹೊರಗಡೆ 55 ಸಾವಿರ ರೂಪಾಯಿ ಬೆಳೆಗಾಗಿ ಸಾಲ ಮಾಡಿದ್ದ. ಪಿ.ಎಸ್.ಐ ನಿಂಗಪ್ಪ ಜಕ್ಕಣ್ಣವರ ಪ್ರಕರಣ ದಾಖಲಿಸಿಕೊಂಡಿದ್ದಾರೆ.