Ticker

6/recent/ticker-posts

ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ

ಮುಂಡಗೋಡ ತಾಲೂಕಿನ  ಇಂದೂರ, ಹುನಗುಂದ ಹಾಗೂ ನಂದಿಕಟ್ಟಾ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತರಿಗೆ  ದೇಶಪಾಂಡೆ ರುಡ್ಸೆಟಿ ಸಂಸ್ಥೆಯಿಂದ ಶುಕ್ರವಾರ ಆಹಾರ ಸಾಮಗ್ರಿ  ಕಿಟ್ ಗಳನ್ನು ನೀಡಲಾಯಿತು.


ಹುನಗುಂದ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊರೊನಾ ಮುಂಚೂಣಿಯಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಬೆಂಬಲ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಚ್ ಎಮ್ ನಾಯಕ್ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಧರ್ಮರಾಜ ನಡಗೆರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಲ್ಲವ್ವ ವಿಟ್ಲಾಪುರ   ಶಂಕ್ರಪ್ಪ ಲಮಾಣಿ ಗ್ರಾಮ ಪಂಚಾಯಿತಿ ಸದಸ್ಯರಾದ ತುಕಾರಾಮ ಹೊನ್ನಳ್ಳಿ ಸಿದ್ಧನಗೌಡ ಪಾಟೀಲ್ ಸಹಕಾರಿ ಸಂಘದ ಅಧ್ಯಕ್ಷರಾದ ಹಕ್ಕಿಮ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಆಶಾ ಕಾರ್ಯಕರ್ತರು ರುಡ್ ಸೆಟ್ ಸುಪ್ರವೈಜರ್ ಗ್ರಾಮದ ಹಿರಿಯರು ಹಾಜರಿದ್ದರು