Ticker

6/recent/ticker-posts

ಅಡಿಕೆ ಸಸಿಗಳನ್ನು ಕತ್ತರಿಸಿದ ದುಷ್ಕರ್ಮಿಗಳು.

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿನ ರೈತನೊಬ್ಬರ ಅಡಿಕೆ ತೋಟದಲ್ಲಿ ದುಷ್ಕರ್ಮಿಗಳು ಹೀನ ಕೃತ್ಯ ನಡೆಸಿದ್ದಾರೆ.

ಮೊಣಕಾಲುವರೆಗೆ ಬೆಳೆದಿದ್ದ  ಮೂವತ್ತಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ಕಡಿದು ಹಾಕಿದ ಘಟನೆ ಗುರುವಾರ ಜರುಗಿದೆ.

ರೈತ ಶಿವಾಜಿ  ಶೇಕಾಯಿ ಎಂಬುವರಿಗೆ ಸೇರಿದ ಅಡಿಕೆ ತೋಟದಲ್ಲಿ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ. ಹಗಲುರಾತ್ರಿ ಕಷ್ಟಪಟ್ಉ ಬೆಳೆಸಿದ ಮರಗಳು ಕ್ಷಣಮಾತ್ರದಲ್ಲಿ ನೆಲಕ್ಕೆ ಬಿದ್ದಿವೆ. ರೈತ ಶಿವಾಜಿ ಹಾನಿಯಾದ ಸಸಿಗಳನ್ನು ಕಂಡು ದಿಕ್ಕೇ ತೋಚದಂತಾಗಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ದೃಶ್ಯ ಕಂಡುಬಂತು.

ಬುಧವಾರ ರಾತ್ರಿ ಸಮಯದಲ್ಲಿ ಕಿಡಿಗೇಡಿಗಳು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ಹಾನಿಗೊಳಗಾದ ತೋಟಕ್ಕೆ  ರೈತರಾದ  ಕಲ್ಲನಗೌಡ್ರ ಬಸನಗೌಡ್ರ, ತುಕಾರಾಮ ಅಂಡೋಜಿ, ಸಂತೋಷ  ಬೋಸಲೆ ಮುಂತಾದವರು ಭೇಟಿ ನೀಡಿ ಪರಿಶೀಲಿಸಿದರು.